Posts

Showing posts from June, 2017

ಕಲಾಂ ಪಯಣ… ಭೂಮಿಯಿಂದ ಭಾನುವರೆಗೆ..

Image
ಭಾರತದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ರಾಷ್ಟ್ರಪತಿ ಎನಿಸಿದ್ದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಹುಟ್ಟಿದ್ದು 1931ರ ಅಕ್ಟೋಬರ್ 15ರಂದು. ಈಗ ತಮಿಳು ನಾಡಿಗೆ ಸೇರಿದ ಸಣ್ಣ ಕರಾವಳಿ ಪಟ್ಟಣದಲ್ಲಿ. ದೇಶದ ಅತ್ಯುನ್ನತ ಸಂವಿಧಾನಾತ್ಮಕ ಹುದ್ದೆಯನ್ನು ಅಲಂಕರಿಸುವ ಮೊದಲು ಅವರು ಬಾಹ್ಯಾಕಾಶ ಎಂಜಿನಿಯರ್ ಆಗಿ, ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸಿದ್ದರು. ಭಾರತದ ಕ್ಷಿಪಣಿ ತಯಾರಿಕಾ ಯೋಜನೆಯಲ್ಲಿ ಸಕ್ರಿಯ ವಾಗಿ ತೊಡಗಿಸಿಕೊಂಡವರು. 2007ರಲ್ಲೇ ಅವರ ರಾಷ್ಟ್ರಪತಿ ಅಧಿಕಾರಾವಧಿ ಮುಗಿದ ರೂ, ಶಾಲಾಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳ ಜತೆ ಸಾವಿರಾರು ಸಂವಾದಗಳನ್ನು ನಡೆಸುವ ಮೂಲಕ ಅವರು ದೇಶದ ಉದ್ದಗಲ ಕ್ಕೂ ಜನಪ್ರಿಯತೆ ಗಳಿಸಿದ್ದರು. ಜನರ ರಾಷ್ಟ್ರ ಪತಿ, ಭಾರತದ ಕ್ಷಿಪಣಿ ಮನುಷ್ಯ ಎಂದು ಅವರು ಜನಜನಿತರಾಗಿದ್ದರು. ಅವೂಲ್ ಫಕೀರ್ ಝೈನುಲ್ ಆಬಿದೀನ್ ಅಬ್ದುಲ್ ಕಲಾಂ ಅವರ ತಂದೆ. ಝೈನುಲ್ ಆಬಿದೀನ್ ತಮಿಳುನಾಡಿನ ಯಾತ್ರಾ ಸ್ಥಳವಾದ ರಾಮೇಶ್ವರಂನಲ್ಲಿ ದೋಣಿ ತಯಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು. ಈ ತಮಿಳು ಮುಸ್ಲಿಮ್ ಕುಟುಂಬಕ್ಕೆ ಸೇರಿದ ಅವರಿಗೆ ಆರ್ಥಿಕ ಮುಗ್ಗಟ್ಟು ಇದ್ದುದರಿಂದ ಬಾಲ್ಯದಲ್ಲೇ ಪತ್ರಿಕೆ ಹಂಚುತ್ತಿದ್ದರು. ನನ್ನ ಉತ್ಸಾಹಕ್ಕೆ ಯಾವ ಇತಿಮಿತಿಯೂ ಇರಲಿಲ್ಲ. ‘ನಾನು ಎಂಟು ವರ್ಷದವನಾಗಿದ್ದಾಗಲೇ, ನನ್ನ ಕುಟುಂಬದ ಆದಾಯಕ್ಕೆ ನಾನು ಅರ್ಥಪೂರ್ಣ ಕೊಡುಗೆ ನೀಡುತ್ತಿದ್ದೆ. ನನ್ನ ಹೊಸ ಕೆಲಸ ನನ್ನ ಜೀವನದ ಅವಿಭಾಜ್ಯ ಅಂಗವಾಗಿತ್ತು’ ಎಂ...

ಸಾವರ್ಕರ್ ಎಂಬ ಸ್ಪೂರ್ತಿ ಕಿಡಿಗೆ ಎದೆಗೂಡಲ್ಲಿ ಜಾಗವಿಡಿ!

Image
ಆ ವೀರ ಕಲಿಯನ್ನು ನೆನಪಿಸಿಕೊಂಡಾಗಲೆಲ್ಲ ದಿವಂಗತ ವಿದ್ಯಾನಂದ ಶೆಣೈ ಕಣ್ಣಮುಂದೆ ಬರುತ್ತಾರೆ. ಹನ್ನೆರಡು ವರ್ಷಗಳ ಹಿಂದೆ ಅವರು ಮಾಡಿದ್ದ ಭಾಷಣದ ಝೇಂಕಾರ ಕಿವಿಯಲ್ಲಿ ಇನ್ನೂ ಹಸಿಯಾಗಿಯೇ ಇದೆ. ‘ಅವತ್ತು ಛಾಫೇಕರ್ ಸಹೋದರರು ಬ್ರಿಟಿಷ್ ಅಧಿಕಾರಿ ರಾಂಡ್‌ನನ್ನು ಹತ್ಯೆ ಮಾಡಿದರು. ಅದು ಬ್ರಿಟಿಷರಿಗೆ ತಿಳಿದುಹೋಯಿತು. ಬಂಧಿಸಿ ವಿಚಾರಣೆಗೆ ಗುರಿಪಡಿಸಿದ ಬ್ರಿಟಿಷರು ಛಾಫೇಕರ್ ಸಹೋದರರ ಮೇಲೆ ‘ಕೊಲೆ’ ಆರೋಪ ಹೊರಿಸಿದರು. ಕೊನೆಗೆ ಗಲ್ಲಿಗೂ ಏರಿಸಿದರು. ಇದನ್ನೆಲ್ಲಾ ನೋಡಿದ 14 ವರ್ಷದ ಬಾಲಕ ವಿನಾಯಕ ದಾಮೋದರ ಸಾವರ್ಕರ್ ಮನಸ್ಸಿಗೆ ಬಹಳ ನೋವಾಗುತ್ತದೆ. ಮನೆಗೆ ಓಡೋಡಿ ಬಂದ ಆತ ದೇವರ ಕೋಣೆಯ ಬಾಗಿಲು ತೆರೆದು ದೇವಿಯ ಮುಂದೆ ಕುಳಿತು ಕೇಳುತ್ತಾನೆ. ‘ಅಮ್ಮಾ? ಛಾಫೇಕರ್ ಸಹೋದರರು ಮಾಡಿದ್ದು ‘ಕೊಲೆ’ಯೋ, ‘ಸಂಹಾರ’ವೋ, ನಾವು ‘ದುರುಳರ ಸಂಹಾರ’ ಎನ್ನುತ್ತೇವೆ. ಪುಣೆಗೆ ಪ್ಲೇಗ್ ಬಡಿದಾಗ ಉಸ್ತುವಾರಿ ವಹಿಸಿ ಬಂದ ರಾಂಡ್ ಮಾಡಿದ್ದೇನು? ಪ್ಲೇಗ್ ಪೀಡಿತರನ್ನು ಪತ್ತೆ ಹಚ್ಚುವ ಸಲುವಾಗಿ ಜನರನ್ನು ಬೀದಿಗೆಳೆದ. ಮಹಿಳೆಯರು ಮನೆ ಮುಂದೆ ಅರೆಬೆತ್ತಲಾಗಿ ನಿಲ್ಲುವಂತೆ ಮಾಡಿದ, ಕೆಲ ಮಹಿಳೆಯರ ಮೇಲೆ ಅತ್ಯಾಚಾರ ಕೂಡ ನಡೆಯಿತು. ಅಂತಹ ಪ್ರಜಾಪೀಡಕ ರಾಂಡ್‌ನನ್ನು ಕೊಂದರೆ ಅದು ಹೇಗೆ ಕೊಲೆಯಾಗುತ್ತದೆ? ಅದು ದುಷ್ಟ ಸಂಹಾರವಲ್ಲವೆ ದೇವಿ?’ ಒಂದು ಕಡೆ ವಿದ್ಯಾನಂದ ಶೆಣೈ ಅವರ ಭಾಷಣ ನಮ್ಮನ್ನು ಮಂತ್ರಮುಗ್ಧಗೊಳಿಸುತ್ತಿದ್ದರೆ ಮತ್ತೊಂದೆಡೆ ಸಾವರ್ಕರರು ಮನವನ್ನೆಲ್ಲ ...

ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ

Image
ಮನೆಗೆ ಹೊರಟಿದ್ದೆ ಎಲೆಕ್ರ್ಟಿಕ್ ಕಂಬಕ್ಕೆ ಯಾರೋ ಒಂದು ಬೋರ್ಡ್ ನೇತು ಹಾಕಿದ್ದರು. ಅದರಲ್ಲಿ ಏನು ಬರೆದಿರಬಹುದು ಎಂದು ಕುತೂಹಲ ಉಂಟಾಯಿತು ಹತ್ತಿರ ಹೋಗಿ ನೋಡಿದರೆ ಅದರಲ್ಲಿ ಬರೆದಿತ್ತು- ಈ ರಸ್ತೆಯಲ್ಲೆಲ್ಲೊ ಐವತ್ತು ರುಪಾಯಿಯನ್ನು ಕಳೆದುಕೊಂಡಿದ್ದೇನೆ ನಿಮಗೆ ಯಾರಿಗಾದರೂ ಸಿಕ್ಕರೆ, ಈ ವಿಳಾಸದಲ್ಲಿರುವ ನನಗೆ ತಲುಪಿಸಿ. ನನ್ನ ಕಣ್ಣಿನ ದ್ರಷ್ಟಿ ತುಸು ಮಂಜಾಗಿದೆ ದಯವಿಟ್ಟು ಸಹಾಯ ಮಾಡಿ. ನಾನು ಆವಿಳಾಸವನ್ನು ಗಮನಿಸಿದೆ ಅಲ್ಲಿರುವ ವ್ಯಕ್ತಿಯನ್ನು ನೋಡಬೇಕು ಎಂದು ಬಲವಾಗಿ ಅನಿಸಿತು. ಆವಿಳಾಸದ ಬಳಿ ಹೋದಾಗ ಗುಡಿಸಲಿನಂತ ಮನೆಯ ಮುಂದೆ ಮುದುಕಿಯೊಬ್ಬಳು ಕುಳಿತಿದ್ದಳು. ಆಕೆ ಬಸವಳಿದಿದ್ದಳು ನಾನು ಬರುತ್ತಿರುವ ಸದ್ದನ್ನು ಕೇಳಿ ಯಾರು? ಎಂದಳು ನಾನು ಅಜ್ಜಿ ,ಈ ದಾರಿಯಲ್ಲಿ ಬರುವಾಗ ಐವತ್ತು ರೂಪಾಯಿ ಸಿಕ್ಕಿತು. ಕರೆಂಟ್ ಕಂಬದ ಮೇಲೆ ಬರೆದ ಬೋರ್ಡ್ ನೋಡಿದೆ. ನಿಮಗೆ ಕೊಟ್ಟು ಹೋಗೋಣ ಎಂದು ಬಂದೆ ಅಂದೆ. ನನ್ನ ಮಾತು ಕೇಳಿ ಅವಳ ಕಣ್ಣು ತೇವವಾದವು. ಈಗಾಗಲೆ 40-50 ಮಂದಿ ಬಂದು ದಾರಿಯಲ್ಲಿ ತಮಗೆ ಐವತ್ತು ರೂಪಾಯಿ ಸಿಕ್ಕಿತೆಂದು ಕೊಟ್ಟು ಹೋಗಿದ್ದಾರೆ. ಆಷ್ಟಕ್ಕೂ ಆ ಕರೆಂಟ್ ಕಂಬದ ಮೇಲೆ ನಾನು ಬೋರ್ಡ್ ನೇತು ಹಾಕಿಲ್ಲ ನನಗೆ ಓದಲು ಬರೆಯಲು ಬರುವುದಿಲ್ಲ, ಎಂದಳು . ಪರವಾಗಿಲ್ಲ ಐವತ್ತು ರುಪಾಯಿ ಇಟ್ಟುಕೊಳ್ಳಿ ಎಂದೆ. ನೀವು ಇಲ್ಲಿಂದ ಹೋಗುವಾಗ ಆ ಕಂಬದ ಮೇಲೆ ಬರೆದ  ಬೋರ್ಡ್ ತೆಗೆದುಹಾಕಿ ಎಂದು ನನ್ನನ್ನು ವಿನಂತಿಸಿದಳು. ಸೋಜಿಗವೆ...

ರೋಲ್ಸ್ ರಾಯ್ಸ್ "ಓಹ್, ಅದೇ ಕಾರ್ ಕಸ ಸಂಗ್ರಹಕ್ಕಾಗಿ ಭಾರತದಲ್ಲಿ ಬಳಸಲಾಗುತ್ತದೆ?"

Image
    ಭಾರತದ ಜೈ ಸಿಂಗ್, ಅಳ್ವಾರ್ ನ ಮಹರಾಜ (ರಾಜಸ್ಥಾನ)  ಈ ಕಥೆ ಭಾರತದ ಇತಿಹಾಸದಲ್ಲಿ ಬರುವ ವಿಲಕ್ಷಣ ಕಥೆಗಳಲ್ಲಿ ಒಂದು. 1920 ರಲ್ಲಿ, ಕಿಂಗ್ ಜೈ ಸಿಂಗ್ ಲಂಡನ್ ಭೇಟಿ ಬಾಂಡ್ ಸ್ಟ್ರೀಟ್ನಲ್ಲಿ ತನ್ನ ಕ್ಯಾಶುಯಲ್ ನೋಟಕ್ಕೆ ಸಾಮಾನ್ಯ ಉಡುಗೆಯೊಂದಿಗೆ ವಾಕಿಂಗ್ ಹೋದರು. ಬಾಂಡ್ ಸ್ಟ್ರೀಟ್ನಲ್ಲಿ ರೋಲ್ಸ್ ರಾಯ್ಸ್ ಶೋ ರೂಮ್ ಗೆ  ಬಂದು ಅವರು ರೋಲ್ಸ್ ರಾಯ್ಸ್ ಕಾರಿನ ವಿಶೇಷತೆಗಳನ್ನು ಹಾಗು ಬೆಲೆ ಪ್ರಶ್ನಿಸಲು ಭೇಟಿ ಮಾಡಿದರು . ಇವರನ್ನ ಭಾರತೀಯ ನಾಗರಿಕನೆಂದು ತಿಳಿದ ಬ್ರಿಟಿಷ್  ಮಾರಾಟಗಾರ ಅವರಿಗೆ ಸರಿಯಾಗಿ ಸ್ಪಂದಿಸದೇ ಕೇವಲವಾಗಿ ನೋಡಿ ಹೊರ ಹಾಕಿದನು  ಇದರಿಂದ ಕುಪಿತಗೊಂಡ ರಾಜಾ ಜೈ ಸಿಂಗ್ ತಾನು ತಂಗಿದ್ದ  ಹೋಟೆಲ್ ಗೆ ಹಿಂದಿರುಗಿ ತಾನು ಆ ಶೋ ರೂಂ ಗೆ ಹೋಗಬೇಕೆಂದು ತನ್ನ ಸೇವಕರಿಗೆ ತಿಳಿಸಿದ. ಕೆಲವೇ ಸಮಯದಲ್ಲಿ ಹೋಟೆಲ್ ನಿಂದ ಆ ಶೋ ರೂಂ ವರೆಗೂ ರೆಡ್  ಕಾರ್ಪೆಟ್ ಹಸಲಾಯಿತು ರಾಜ ಜೈಸಿಂಗ್ ತನ್ನ ಸೇವಕರೊಡನೆ ಮತ್ತೆ ರೋಲ್ಸ್ ರಾಯ್ಸ್ ಶೋ ರೂಮ್ ಗೆ  ಬಂದರು ಆಗ ಆ ಬ್ರಿಟಿಷ್  ಮಾರಾಟಗಾರನಿಗೆ ಆಶ್ಚರ್ಯ, ರಾಜ ಜೈಸಿಂಗ್  6 ಕಾರುಗಳನ್ನ ವಿತರಣಾ ವೆಚ್ಚ ಸೇರಿದಂತೆ ಪೂರ್ಣ ಹಣ ಪಾವತಿಸಿ  ಕೊಂಡುಕೊಂಡರು ಎಲ್ಲಾ ಆರು ರೋಲ್ಸ್ ರಾಯ್ಸ್ ಕಾರು ಭಾರತ ತಲುಪಿದ ನಂತರ, ರಾಜ ಸಾಗಿಸುವ ಮತ್ತು ನಗರದಲ್ಲಿ ಕಸ ಸಂಗ್ರಹಿಸುವ ಉದ...

ಭಟ್ಟನ ಸಾವಿಗೆ ಕಣ್ಣೀರಿಟ್ಟ ಕಾಶ್ಮೀರಿ

Image
ಭಟ್ಟನ ಸಾವಿಗೆ ಕಣ್ಣೀರಿಟ್ಟ ಕಾಶ್ಮೀರಿ ಮುಸ್ಲೀಮರು !! ಅಯ್ಯೋ ತಡೀರಿ ಸ್ವಲ್ಪ ಈ ಭಟ್ಟ  ಉಡುಪಿ ಕುಂದಾಪುರ ಭಟ್ಟ ಅಲ್ಲ,ಕಾಶ್ಮೀರಿ ಭಟ್ಟ . ಸಬ್ಜಾರ್ ಭಟ್ ಈತನ ಹಿಂದಿನವರು  ಬ್ರಾಹ್ಮಣರು ಪ್ರಸಿದ್ಧ ಪಂಡಿತ ಉತ್ಪಲದೇವ ಭಟ್ಟ  ವಂಶಸ್ಥರು.  ಚಂಡೀಗಡದಲ್ಲಿ ಇಂಜಿನಿಯರಿಂಗ್ ಓದುವಾಗ ತಾನು ಪ್ರೀತಿಸಿದ ಪಂಜಾಬಿ ಹುಡುಗಿ ಒಲಿಯಲಿಲ್ಲ ಅಂತ ಓದನ್ನು ಅರ್ಧಕ್ಕೇ ಬಿಟ್ಟು ಕಣಿವೆಗೆ ವಾಪಾಸ್ ಹೋದ . ಅಲ್ಲಿ ಅವನಿಗೆ ಪರಿಚಯವಾಗಿದ್ದು ಬುರ್ಹಾನ್ ವಾನಿ ಇವನು ಹಿಜ್ಬುಲ್ ಮುಜಾಹಿದ್‌ಗೆ ಸೇರಿದ  ಮತ್ತೊಬ್ಬ ಉಂಡಾಡಿ ಭಗ್ನಪ್ರೇಮಿ. ಬುರ್ಹಾನ್ ವಾನಿ ಕೂಡಾ ಯಾವ ಮೊಗಲ ವಂಶಸ್ಥನಲ್ಲ... ಜಾತಿ ಭೇದದ ಅವಮಾನ ತಾಳದೆ ಇಸ್ಲಾಂ ಧರ್ಮ ಒಪ್ಪಿದ ದಲಿತನಲ್ಲ. ಇವನೂ ಕೂಡಾ ಪಂಡಿತರ ವಂಶದವನೇ. ರೂಪ ಭವಾನಿ ಎಂಬ ಕವಿತ್ರಿಯ ವಂಶದವನು.* ಈ ವಂಶದ ಮುಸ್ಲೀಮರಲ್ಲಿ ಭವಾನಿಯ ಭ ಕಿತ್ತು ಹಾಕುವ ಪರಿಪಾಠ ಇತೀಚೆಗೆ ಶುರುವಾಗಿದ್ದು ಎಲ್ಲಾ ವಾನಿ ಎಂದು ಬದಲಾಯಿಸಿಕೊಂಡಿದ್ದಾರೆ.*   ಇಬ್ಬರೂ ಬಹುಬೇಗ ಆಪ್ತರಾಗಿ ತಮ್ಮ ಪ್ರೇಮವನ್ನು ಒಬ್ಬರಲ್ಲೊಬ್ಬರು ಕಂಡುಕೊಂಡರು. ಇವರಿಬ್ಬರ ಸ್ನೇಹದಿಂದ ಕೋಪಗೊಂಡಿದ್ದ ಬುರ್ಹಾನ್ ವಾನಿಯ ಮಾಜಿ ಪ್ರಿಯತಮೆ ನಾಜಿಯಾ ಸಯೀದ್ ಸಂಚಿನಿಂದ ಆತ  ಸೈನ್ಯದ ಗುಂಡಿಗೆ ಸಿಕ್ಕು ಸತ್ತುಹೋದ. ಪ್ರಿಯ ಸ್ನೇಹಿತನ ಸಾವಿನಿಂದ ಕುದಿಯುತ್ತಿದ್ದ ಸಬ್ಜಾರ್ ಭಟ್ ಕಣಿವೆಯಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ. ಕೊನೆಗೂ ಶುಕ್ರವಾರ ಪ...

ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವದಿಲ್ಲ…!"

"ನಮ್ಮಲ್ಲಿ ತಪ್ಪುಗಳನ್ನು ತೋರಿಸಲು ಅನೇಕರು ಇದ್ದಾರೆ. ಆದರೆ ನಮ್ಮನ್ನು ಸರಿಪಡಿಸಲು ಯಾರೂ ಮನಸ್ಸು ಮಾಡುವದಿಲ್ಲ…!" ಒಮ್ಮೆ ಒಬ್ಬಾತ 3 ದಿನಗಳ ಕಾಲ ಕಷ್ಟಪಟ್ಟು ಒಂದು ಅಧ್ಭುತವಾದ ಪೇಂಟಿಂಗ್ ಅನ್ನು ರಚಿಸಿದ. ಆ ಪೇಂಟಿಂಗ್ ಹೇಗಿದೆ ಎಂದು ಜನಗಳ ಅಭಿಪ್ರಾಯ ತಿಳಿಯ ಬೇಕೆಂದು ಆಸೆಪಟ್ಪ. ನಾಲ್ಕು ರಸ್ತೆ ಸೇರುವ ವೃತ್ತದಲ್ಲಿ ಅದನ್ನು ಪ್ರದರ್ಶನ ಮಾಡಿದ. ಅದರ ಕೆಳಗೆ ಹೀಗೊಂದು ಸಾಲನ್ನು ಬರೆದಿದ್ದ “ನಾನು ಮೊದಲ ಬಾರಿ ಬರೆದ ಪೇಂಟಿಂಗ್ ಇದು. ಇದರಲ್ಲಿ ಲೋಪಗಳು ನಿಮಗೆ ಕಾಣಿಸಬಹುದು. ಎಲ್ಲಿ ಲೋಪ ಕಾಣುತ್ತದೆಯೊ ಅಲ್ಲಿ ಒಂದು × ಚಿನ್ಹೆ ಬರೆಯಿರಿ “ಎಂದು ಅದರಲ್ಲಿತ್ತು . . . ಸಂಜೆಯ ಹೊತ್ತಿಗೆ ಆ ಚಿತ್ರಕಾರ ಪುನಃ ಬಂದು ಚಿತ್ರವನ್ನು ನೋಡಿದ. ಆತನಿಗೆ ಒಮ್ಮೆಲೇ ಅಳು ಬಂದಿತು. ಕಾರಣ ಏನಂದರೆ ಆ ಚಿತ್ರದ ತುಂಬಾ × ಚಿನ್ಹೆಗಳೇ ತುಂಬಿ ಹೋಗಿತ್ತು. . ಚಿತ್ರಕಾರ ಅಳುತ್ತಾ ತನಗೆ ಚಿತ್ರಕಲೆ ಹೇಳಿಕೊಟ್ಟ ಗುರುವಿನ ಬಳಿಗೆ ಬಂದು ಈ ರೀತಿ ಹೇಳಿದ “ನಾನು ಪೇಂಟಿಂಗ್ ಮಾಡಲು ಸಾಧ್ಯವಿಲ್ಲ ಎಂದು ಈ ದಿನ ನನಗೆ ತಿಳಿಯಿತು “ಎಂದು ವಿಷಾದಿಸಿದ. ಗುರುಗಳು ಆತನಿಗೆ ಸಮಾಧಾನ ಮಾಡಿ ಮತ್ತೆ ಆದೇ ಪೇಂಟಿಂಗ್ ಅನ್ನು ಪುನಃ ರಚನೆ ಮಾಡು ಎಂದು ಹೇಳಿದರು. ಮತ್ತೊಮ್ಮೆ ಆ ಪೇಂಟಿಂಗ್ ಬರೆದು ತಂದನು. ಈ ಬಾರಿ ಕೂಡ ಅದೇ ಸ್ಥಳದಲ್ಲಿ ಇಟ್ಟು ಕೆಳಗೆ ಹೀಗೆ ಬರೆಯಲು ಗುರುಗಳು ಸೂಚಿಸಿದರು- “ನಾನು ಬರೆದ ಮೊದಲ ಪೇಂಟಿಂಗ್ ಇದು. ಇದರಲ್ಲಿ ನಿಮಗೆ ಲೋಪಗಳು...